ಹುಬ್ಬಳ್ಳಿ (ಡಿ.4): ಯಾರದ್ದೋ ಜಾಗ ಯಾರಾದ್ದೋ ಮಣ್ಣು ನಮಗ್ಯಾರು ಕೇಳೋರು ಎಂದು ಡೆಂಟಲ್ ಎಸ್ ಡಿ ಎಂ ಹಾಗೂ ತಡಸಿನಕೊಪ್ಪ ಜೋಗೆಲ್ಲಾಪುರ ಗ್ರಾಮದ ಸುಟ್ಟ ಮುತ್ತಲು ಎಗ್ಗಿಲ್ಲದೇ ಮಣ್ಣು ಗಣಿಗಾರಿಕೆ ಮಾಡ್ತಿದ್ರು ಅಧಿಕಾರಿಗಳು ಮಾತ್ರ ಫುಲ್ ಸೈಲೆಂಟ್. ನಿಯಮಕ್ಕೂ ಮೀರಿ ಮಣ್ಣು ಅಗೆಯುತ್ತಿದ್ರು ಯಾರೂ ಕೇಳ್ತಿಲ್ಲ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.ತಡಸಿನಕೊಪ್ಪ ಜೋಗೆಲ್ಲಾಪುರ ಊರಿನವರೆಲ್ಲಾ ಒಂದೆಡೆ ಸೇರಿ ಪಂಚಾಯ್ತಿ ಮಾಡ್ತಿರೋದು ಒಂದೆಡೆಯಾದ್ರೆ, ಮತ್ತೊಂದೆಡೆ ನಮಗ್ಯಾರು ಕೇಳೋರು ಅಂತ ಮಣ್ಣು ತೆಗೆಯೋದಕ್ಕೆ ರೆಡಿ ಆಗಿ ನಿಂತಿರೋ ಲಾರಿಗಳು ಜೆಸಿಬಿಗಳು ಈ ದೃಶ್ಯಗಳು ಕಂಡು ಬಂದಿದ್ದು,ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕಿನ ತಾಲ್ಲೂಕಿನ ತಡಸಿನಕೊಪ್ಪ ಹಾಗೂ ಜೋಗೆಲ್ಲಾಪುರ ಗ್ರಾಮದ ಬಳಿ..ಅಧಿಕಾರಿಗಳ ಕಣ್ಣು ಮುಚ್ಚಿ ಮಣ್ಣು ಗಣಿಗಾರಿಕೆ ನಡಿಸ್ತಾ ಇದ್ದಾರೋ ಬೆಚ್ಚಗೆ ಮಾಡಿ ನಡಿಸ್ತಾ ಇದ್ದಾರೋ ಒಟ್ಟಿನಲ್ಲಿ ಮಣ್ಣು ಅಗೆದು ಸಾಗಾಟ ಮಾಡ್ತಿರೋದು ಸರಿಯಲ್ಲ ಎಂದು ಸ್ಥಳೀಯ ನಿವಾಸಿಗಳು ಕಿಡಿಕಾರಿದ್ದಾರೆ…
ಇನ್ನೂ ಈ ಮಣ್ಣು ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ,ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳನ್ನ ವಿಚಾರಿಸಿದ್ರೆ,ನಕಾಶೆ ತೆಗೆದು ನೋಡ್ತಿವಿ ಯಾರಿಗೆ ಸಂಭಂದಿಸಿದೆ ಜಾಗ ಎಂಬುದನ್ನ ಪತ್ತೆ ಹಚ್ಚತೀವಿ ಅಂತ ಹರಕೆ ಉತ್ತರ ನೀಡಿದ್ದು ಉಂಟು..ಕಳೆದ ಬಾರಿ ತಡಸಿನಕೊಪ್ಪ ಜೋಗೆಲ್ಲಾಪುರ sdm ಸುತ್ತ ಮುತ್ತಲು ಕೋಟಿ ಬೆಲೆ ಮಾಳುವ ಮಣ್ಣು ಕಳ್ಳತನ ಆಗಿದೆ ಇವತ್ತಿಗೂ ಆಗ್ತಾ ಇದೆ ಕ್ರಮ ಯಾವಾಗ ಅಂತ ಸುದ್ದಿಯನ್ನ ಕೂಡ ಬಿತ್ತರ ಮಾಡೀವಿ ಆದರೆ ಇಲ್ಲಿಯ ವರೆಗೆ ಯಾವ ಲಾರಿಯ ಮೇಲೆ ಆಗಲಿ ಯಾವ ಜೇಸಿಬಿ ಮೇಲೆ ಆಗಲಿ ಯಾವ ಜಾಗದ ಮಾಲೀಕರ ಮೇಲೆ ಆಗಲಿ ಮತ್ತು ಪ್ರಮುಖವಾಗಿ ಮಣ್ಣು ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಆಗಿಲ್ಲ..ಈ ಹಿಂದೆ ಜಿಲ್ಲಾಧಿಕಾರಿಗಳು ಕೂಡ ಭರವಸೆ ನೀಡಿದ್ರು ಮತ್ತು ಸಂಭಂದ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಒಂದು ತಂಡವನ್ನು ರಚನೆ ಮಾಡಿ ಸೂಕ್ತ ಕ್ರಮ ಜಾರುಗಬೇಕು ಮತ್ತು ಪರಿಹಾರ ಆಗಬೇಕು ಮತ್ತು ಸರಕಾರಕ್ಕೆ ಹೋಗಬೇಕಾದ ರಾಯಲಿಟಿ ಹೋಗಬೇಕು ಎಂದು ಅಧಿಕಾರಿಗಳಿಗೆ ಆದೇಶ ನೀಡಿದ್ದರು ಆದರೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳು ನಮಗೂ ಇದಕ್ಕೂ ಸಂಭಂದ ಇಲ್ಲದ ರೀತಿಯಲ್ಲಿ ಕಸದ ಬುಟ್ಟಿಗೆ ಪತ್ರವನ್ನು ಬಿಸಾಕಿದ್ದರು..
ಆದರೆ ಸುತ್ತ ಮುತ್ತಲು ಮಣ್ಣು ಗಣಿಗಾರಿಕೆ ಮಾಡುತ್ತಿದ್ದ ಕಾರಣಕ್ಕೆ ಮನೆಗಳಿಗೂ ಕಟ್ಟಡಗಳಿಗೂ ಮತ್ತೆ ಅಲ್ಲಿ ಮಾಡುತ್ತಿರುವ ಹೊಸ ಲೇಔಟ್ ಗಳಿಗೆ ತುಂಬಾ ಸಮಸ್ಯೆಗಳು ಆಗುತ್ತಿವೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ..
ಒಟ್ಟಿನಲ್ಲಿ ಕಳೆದ ಬಾರಿಯು “ ಭೂಮಿ ತಾಯಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದವರ ಮೇಲೆ ಕ್ರಮ ಆಗುತ್ತಾ” ಎಂಬ ಶೀರ್ಷಿಕೆಯ ಅಡಿಯಲ್ಲಿ ನಿಮ್ಮ ನ್ಯೂಸ್ 88 ಕನ್ನಡ ವಾಹಿನಿ ವಿವರವಾಗಿ ಸುದ್ದಿಯನ್ನ ಬಿತ್ತರ ಮಾಡಿತ್ತು ಇವತ್ತು ಕೂಡ ಮರಗಳ ಮಾರಣಹೋಮಗಳ ಜೊತೆಗೆ ಕೋಟಿ ಸಂಪತ್ತು ನಾಶ ಮಾಡಿದವರ ಮೇಲೆ ಕ್ರಮ ಯಾವಾಗ ಎಂದು ಸಾರ್ವಜನೇಕರು ಪ್ರಶ್ನೆ ಮಾಡಿದಾಗ ನಿಮ್ಮ ವಾಹಿನಿ ಧ್ವನಿ ಎತ್ತಿದೆ..! ಸೊ ಖಡಕ್ ಜಿಲ್ಲಾಧಿಕಾರಿಗಳು ಜಿಲ್ಲೆಗೆ ತಾಯಿಯ ಸ್ವರೂಪ ಜಿಲ್ಲೆಯ ಸಂಪತ್ತನ್ನ ಕಾಯೋ ಮಹಾ ತಾಯಿ ಮಹಿಳೆಯ ಸ್ಥಾನದಲ್ಲಿ ದಿವ್ಯ ಪ್ರಭು ಅವರು ಭೂ ತಾಯಿಯ ಗರ್ಭವನ್ನೇ ಸೀಳಿರುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಮತ್ತು ಭೂ ಮತ್ತು ಗಣಿ ಇಲಾಖೆ ಅಧಿಕಾರಿಗಳಿಗೆ ಯಾವ ರೀತಿ ಸೂಚನೆ ನೀಡುತ್ತಾರೆ ಎಂಬುದನ್ನ ಕಾದು ನೋಡಬೇಕಾಗಿದೆ..!
ಸ್ಪೆಷಲ್ ನ್ಯೂಸ್ ಬ್ಯುರೋ ನ್ಯೂಸ್ 88 ಕನ್ನಡ ಧಾರವಾಡ




