ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ಅಕ್ಕಿ ಆಲೂರು ಗ್ರಾಮದ ಶ್ರೀಶೈಲ ಶಾಖಾ ಶ್ರೀ ಮುತ್ತಿನಕಂತಿಮಠ ಗುರುಪೀಠದಲ್ಲಿ ನಿರ್ಮಾಣಗೊಂಡಿರುವ
ಶ್ರೀ ಬ್ರಹ್ಮರಾoಭ ಸಮೇತ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಹಾಗೂ ಪಂಡಿತಾರಾದ್ಯ ಮಂಗಲ ಭವನದ
‘ಮಹೋದ್ಘಾಟನಾ ಪೂರ್ವಭಾವಿ ಸಭೆ – 2026’ ಕಾರ್ಯಕ್ರಮವು ಭಕ್ತಿಭಾವದಿಂದ ನಾಳೆ ನಡೆಯಲಿದೆ.
ಈ ಪವಿತ್ರ ಕಾರ್ಯಕ್ರಮವು ದಿನಾಂಕ 23-05-2026 ರಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದ್ದು,
ಅನೇಕ ಪೂಜ್ಯ ಸ್ವಾಮೀಜಿಗಳು, ಗಣ್ಯರು, ಭಕ್ತಾದಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಧಾರ್ಮಿಕ ಪರಂಪರೆ, ಗುರುಭಕ್ತಿ ಹಾಗೂ ಸಮಾಜ ಸೇವೆಯ ಸಂಕೇತವಾಗಿರುವ ಈ ಮಹೋತ್ಸವದಲ್ಲಿ
ಎಲ್ಲಾ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ಆಶೀರ್ವಾದ ಪಡೆಯುವಂತೆ ವಿನಂತಿಸಿಕೊಳ್ಳಲಾಗುತ್ತದೆ.
ಕಾರ್ಯಕ್ರಮದಲ್ಲಿ ವಿಶೇಷ ಪೂಜೆ, ಆಶೀರ್ವಚನ, ಧಾರ್ಮಿಕ ಉಪನ್ಯಾಸ ಹಾಗೂ ಮಹಾಪ್ರಸಾದ ವ್ಯವಸ್ಥೆ ಇರಲಿದೆ.
ಸ್ಥಳ :ಮುತ್ತಿನಕಂತಿಮಠ ಗುರುಪೀಠ,ಅಕ್ಕಿಆಲೂರು..ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕು
“ಸರ್ವರಿಗೂ ಆದರದ ಸ್ವಾಗತ”




