ನವಲಗುಂದ: ಕಲಿಯುಗದ ಕಾಮಧೇನು, ಬೇಡಿದ ವರವನ್ನು ದಯಪಾಲಿಸುವಂತಹ ಶ್ರೀ ರಾಮಲಿಂಗ ಕಾಮದೇವರ ದೇವಾಲಯ ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ವಿನೋದ್ ಅಸೂಟಿ ಅಭಿಮಾನಿಗಳ ವತಿಯಿಂದ ನೀರು ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಸೇವಾ ಕಾರ್ಯಕ್ರಮಕ್ಕೆ ಪಂಚಗೃಹ ಹಿರೇಮಠದ ನಿಯೋಜಿತ ಪೀಠಾಧಿಪತಿ ಶ್ರೀ ವೀರ ಬಸವ ದೇವರೊಂದಿಗೆ ಶ್ರೀ ವಿನೋದ ಅಸೂಟಿ ಕೆಪಿಸಿಸಿ ಸದಸ್ಯರು,ಧಾರವಾಡ ಲೋಕಸಭಾ ಕ್ಷೇತ್ರ ಚಾಲನೆ ನೀಡಿದರು..
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ವೀರ ಬಸವ ದೇವರು, ಭಕ್ತರ ಸೇವೆಯೇ ದೇವರ ಸೇವೆ ಎಂದು ತಿಳಿಸಿ, ವಿನೋದ್ ಅಸೂಟಿ ಅಭಿಮಾನಿಗಳು ದರ್ಶನಕ್ಕೆ ಬಂದ ಭಕ್ತರಿಗೆ ನೀರು ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಹರ್ಷ ವ್ಯಕ್ತಪಡಿಸಿದರು. “ಶ್ರೀ ರಾಮಲಿಂಗ ಕಾಮದೇವರಿಗೆ ನಮ್ಮದು ಅಲ್ಪ ಸೇವೆಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶ್ರೀ ವಿನೋದ ಅಸೂಟಿ (ಕೆಪಿಸಿಸಿ ಸದಸ್ಯರು, ಧಾರವಾಡ), ಮಂಜು ಜಾಧವ, ಹನಮಂತ ಚಿಕ್ಕಣ್ಣವರ, ಕುಮಾರ್ ಕಲಾಲ್, ಮಂಜುನಾಥ ಬೈಲೂರ್, ಶಿವಾನಂದ ಚಲವಾದಿ, ಸಿದ್ದು ಕರೆನ್ನವರ, ಲಕ್ಷ್ಮಣ ಗುಡಾರದ, ಪ್ರವೀಣ ಮೂಗನ್ನವರ, ಪ್ರಕಾಶ ಸಾರವಾರಿ, ಸುಲೇಮಾನ್ ನಾಶಿಪುಡಿ, ಬಶೀರ್ ಹುನಗುಂದ, ಮಹೇಶ ಕಾಳೆ ಸೇರಿದಂತೆ ವಿನೋದ್ ಅಸೂಟಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು..




