ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ, ವಿನೂತನ ಪರಿಕಲ್ಪನೆ ಹಾಗೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಗಣೇಶೋತ್ಸವ ಸಮಿತಿಗಳಿಗೆ ನಿಮ್ಮ NEWS88 KARNATAKA ವತಿಯಿಂದ ವಿಶೇಷ ಬಹುಮಾನ.ನಿಮ್ಮ ಗಣಪತಿಯ ವೈಭವವನ್ನು ನಮಗೆ ತೋರಿಸಿ…ನಿಮ್ಮ ಸಂಭ್ರಮವನ್ನು ಕರ್ನಾಟಕಕ್ಕೆ ಪರಿಚಯಿಸಿ!
ಗಣೇಶ ಚತುರ್ಥಿ ಅಂದ್ರೆ ಭಕ್ತಿ, ಸಂಭ್ರಮ, ಸಡಗರ… ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತೀಕ. ಆದರೆ ಹಬ್ಬದ ನೆಪದಲ್ಲಿ ನಡೆಯುವ ಕಾನೂನುಬಾಹಿರ ಚಟುವಟಿಕೆಗಳು, ನಶೆ, ಗಾಂಜಾ–ಡ್ರಗ್ಸ್ ಸೇವನೆ, ಮೋಜು–ಮಸ್ತಿ ನಂತರದ ಗುಂಪು ಘರ್ಷಣೆ, ಚಾಕು–ಚೂರಿ ದಾಳಿ ಹಾಗೂ ಅಮೂಲ್ಯ ಜೀವಗಳು ಬಲಿಯಾಗುವ ಘಟನೆಗಳು ನಮ್ಮ ಸಮಾಜಕ್ಕೆ ದೊಡ್ಡ ಸವಾಲಾಗಿವೆ. ಅವಳಿ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಗಲು–ರಾತ್ರಿ ಶ್ರಮಿಸಿ ಕಟ್ಟುನಿಟ್ಟಿನ ಕಣ್ಗಾವಲು ಇಟ್ಟಿದ್ದರೂ, ಯುವಕರು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ. ಇದೇ ಉದ್ದೇಶದಿಂದ NEWS88 KARNATAKA ವತಿಯಿಂದ ನಶಾಮುಕ್ತ ಸಮಾಜ, ಯುವಕರ ಆರೋಗ್ಯ ಮತ್ತು ನಮ್ಮ ಸಂಸ್ಕೃತಿ–ಪರಂಪರೆಯ ಸಂರಕ್ಷಣೆಗಾಗಿ ವಿಶೇಷ ಅಭಿಯಾನದ ಭಾಗವಾಗಿ “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026” ಆಯೋಜಿಸಲಾಗಿದೆ. ಹಬ್ಬವನ್ನು ನಶೆಯಲ್ಲಿ ಅಲ್ಲ… ಭಕ್ತಿಯಲ್ಲಿ ಆಚರಿಸೋಣ. ಮೋಜು–ಮಸ್ತಿಯಲ್ಲಿ ಅಲ್ಲ… ನಮ್ಮ ಸಂಸ್ಕೃತಿ ಮತ್ತು ಪ್ರತಿಭೆಯಲ್ಲಿ ಸಂಭ್ರಮಿಸೋಣ. ಯುವಕರು ಬದಲಾಗಲಿ… ಆರೋಗ್ಯದ ಕಡೆ ಗಮನ ಹರಿಸಲಿ… ನಮ್ಮ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ಕೊಂಡೊಯ್ಯಲಿ. ಇದೇ NEWS88 KARNATAKAದ ಆಶಯ.
ಒಟ್ಟಿನಲ್ಲಿ ಗಣೇಶ ಚತುರ್ಥಿ ಅಂದ್ರೆ ಸಂಭ್ರಮ… ಭಕ್ತಿ… ಸಡಗರ… ಈ ಬಾರಿಯ ನಿಮ್ಮ ಗಣೇಶೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು NEWS88 KARNATAKA ಹೊತ್ತು ತಂದಿದೆ “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026!” ನಿಮ್ಮ ಗಣಪತಿ ಮೂರ್ತಿಯ ಅದ್ಧೂರಿ ಅಲಂಕಾರ, ವಿಶೇಷ ಪರಿಕಲ್ಪನೆ ಹಾಗೂ ವಿನೂತನ ಕಾರ್ಯಕ್ರಮಗಳನ್ನು ಆಯೋಜಿಸಿ, ನಿಮ್ಮ ಪ್ರತಿಭೆ ಮತ್ತು ಕ್ರಿಯೇಟಿವಿಟಿಯನ್ನು ಪ್ರದರ್ಶಿಸಿ. ಅತ್ಯುತ್ತಮ ಅಲಂಕಾರ ಹಾಗೂ ವಿನೂತನ ಕಾರ್ಯಕ್ರಮ ಆಯೋಜಿಸುವ ಗಣೇಶೋತ್ಸವ ಸಮಿತಿಗಳಿಗೆ NEWS88 KARNATAKA ವತಿಯಿಂದ ವಿಶೇಷ ಬಹುಮಾನ! ಹಾಗಾದರೆ ತಡವೇಕೆ? ನಿಮ್ಮ ಗಣಪತಿಯ ವೈಭವವನ್ನು ತೋರಿಸಿ… ನಿಮ್ಮ ಸಂಭ್ರಮವನ್ನು ಗ್ರ್ಯಾಂಡ್ ಆಗಿಸಿ… ಗೆಲ್ಲಿರಿ ವಿಶೇಷ ಬಹುಮಾನ! ಇದು ನಿಮ್ಮ ಗಣಪತಿಯ ಹಬ್ಬ… ಇದು ನಿಮ್ಮ ಗೆಲುವಿನ ವೇದಿಕೆ… “ಗಣಪತಿ ಗ್ರ್ಯಾಂಡ್ ಫೆಸ್ಟ್ – 2026” – NEWS88 KARNATAKA ಜೊತೆ!
ಗಣಪತಿ ಗ್ರ್ಯಾಂಡ್ ಫೆಸ್ಟ್ – 2026: NEWS88 ಕರ್ನಾಟಕ ನಶಾಮುಕ್ತ ಸಮಾಜಕ್ಕಾಗಿ… ನಮ್ಮ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಒಂದು ವಿಶೇಷ ಅಭಿಯಾನ ಜೊತೆಗೆ ವಿನೂತನ ಹೆಜ್ಜೆ..




