ಹುಬ್ಬಳ್ಳಿ(ಸುಳ್ಳ):ಗ್ರಾಮದ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ನಾಳೆ ಜನವರಿ 4 ರಂದು ಅಯ್ಯಪ್ಪ ಸ್ವಾಮಿ ಮಂಡಲದ ಮಹಾಪೂಜೆ ಮತ್ತು ಅನ್ನ ಪ್ರಸಾದ ಜರುಗಲಿದೆ ಎಂದು ಗ್ರಾಮದ ಹಿರಿಯರು ಮತ್ತು ಗುರುಸ್ವಾಮಿಗಳು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲ್ಲೂಕು ಸುಳ್ಳ ಗ್ರಾಮದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತವೃಂದ ವತಿಯಿಂದ ಮಂಡಲದ ಮಹಾಪೂಜೆ ಅತಿ ವಿಜೃಂಭನೇಯಿಂದ ಜರುಗಲಿದ್ದು,ಶ್ರೀ ಅಯ್ಯಪ್ಪ ಸ್ವಾಮಿಯ ಮಹಾಪೂಜೆ ವಿಶೇಷ ಅಲಂಕಾರದೊಂದಿಗೆ ವಿವಿಧ ಪೂಜಾ ವಿಧಿ ವಿಧಾನ ಜೊತೆ ಅದ್ದೂರಿಯಾಗಿ ಜರುಗಲಿದೆ.
ಈ ಸಂದರ್ಭದಲ್ಲಿ ಭಕ್ತಾದಿಗಳು ಶ್ರೀ ಅಯ್ಯಪ್ಪ ಸ್ವಾಮಿಯ ಪೂಜೆಯಲ್ಲಿ ಭಾಗಿಯಾಗಿ ಅನ್ನ ಪ್ರಸಾದ ಸ್ವೀಕರಿಸುವುದರ ಜೊತೆಗೆ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಅಯ್ಯಪ್ಪ ಮಾಲಾಧಾರಿಗಳು ತಿಳಿಸಿದರು.




