ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಚಬ್ಬಿ ಗ್ರಾಮದಲ್ಲಿರುವ ಚಬ್ಬಿ ಕಣಪ್ಪ ಅಥವಾ ಸಿಂಧೂರ ಕಣಪ್ಪ ಎರಡು ನೂರು ವರ್ಷಗಳ ಇತಿಹಾಸವನ್ನು ಹೊಂದಿದ್ದು ಹಾಗೂ ಈ ಗಣಪನಕ್ಕೆ ವಿಶೇಷ ಇತಿಹಾಸವಿದೆ. 1827ರಲ್ಲಿ ತಮ್ಮಪ್ಪ ಎಂಬ ಕುಲಕರಣಿಗೆ ಸಂತಾನ ಭಾಗ್ಯ ಇಲ್ಲದ ಕಾರಣ ಕೃಷ್ಣನ್ ಇಂದ್ರ ಗುರುಗಳ ಮಾರ್ಗದರ್ಶನದಿಂದ ಈ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಪ್ರತಿಷ್ಠಾಪನೆಯ ಆರು ತಿಂಗಳ ನಂತರ ಗಂಡು ಮಗು ಸಂತಾನವಾಯಿತು ಎಂದು ಈ ಚಬ್ಬಿ ಗಣಪನ ಪ್ರತಿಷ್ಠಾಪನೆ ಮುಂದುವರೆಯುತ್ತಾ ಬಂದಿದೆ ಕಳೆದೆರಡು ದಶಕಗಳಿಂದ ಈ ಸಿಂಧೂರ ಗಣಪತಿಯ ಪ್ರತಿಷ್ಠಾಪನೆ ನಡೆಯುತ್ತಾ ಬಂದಿದೆ.
ಈ ಗಣೇಶನ ವಿಶೇಷತೆ ಏನಂದರೆ ಸಿಂಧೂರ ಹಾಗೂ ಎಲ್ಲಾ ಗಣಪತಿ ಬಲಗೈಯಿಂದ ಆಶೀರ್ವದಿಸಿದರೆ ಈ ಗಣಪತಿಯ ಬಲಗೈಯಲ್ಲಿ ಮುರಿದ ಂತ ಹಾಗೂ ಎಡಗೈಯಲ್ಲಿ ಶಿವಲಿಂಗ ವಿರುವುದು ಹಾಗೂ ಉಳಿದೆರಡು ಕೈಯಲ್ಲಿ ಆಯುಧಗಳನ್ನು ಹಿಡಿದಿರುವುದು ಇಂತಹ ಗಣಪಗಳನ್ನು ನಾವು ಮೈಸೂರು ಹಾಗೂ ಇಂದೋರ್ಗಳ್ಳಲ್ಲಿ ಮಾತ್ರ ಕಾಣಬಹುದು.
ಪ್ರಾರಂಭದಲ್ಲಿ ಈ ಸಿಂಧೂರ ಗಣಪತಿಯ ಪ್ರತಿಷ್ಠಾಪನೆಯೂ ಕುಲಕರ್ಣಿಯ ಮನೆತನದವರು ಮಾತ್ರ ಪ್ರತಿಷ್ಠಾಪಿಸಲಾಗುತ್ತಿತ್ತು ಈಗ ಪಾಟೀಲ್ ಮನೆತನದವರು ಕೂಡ ಈ ಗಣೇಶನನ್ನು ಪ್ರತಿಷ್ಠಾಪನೆ ಮಾಡುತ್ತಾರೆ 2026 ಆರರ ಪ್ರಕಾರ 11 ಮನೆಗಳಲ್ಲಿ ಪ್ರತಿಷ್ಠಾಪನೆ ಆಗಿದೆ. ಪ್ರತಿ ವರ್ಷ ಈ ಗಣಪತಿಯ ಗಾತ್ರವನ್ನು ಬಡಿಗೇರ್ ನಿರ್ಧರಿಸುತ್ತಾರೆ. ಸಾಮಾನ್ಯವಾಗಿ ಈ ಗಣಪ 21 ಇಂಚ್ ತಯಾರಿಸಲಾಗುತ್ತದೆ.
ಸಿಂಧೂರ ಗಣಪತಿಯ ವಿಸರ್ಜನೆಯನ್ನು ಕುಲಕರ್ಣಿ ಮನೆತನದವರು ಮೂರು ದಿನಕ್ಕೆ ಮಾಡಿದರೆ ಪಾಟೀಲ್ ಮನೆತನದವರು 5 ದಿನಗಳವರೆಗೂ ಗಣಪನನ್ನು ಕೂರಿಸಲಾಗುತ್ತಿದೆ ಹಾಗೂ ಪ್ರತಿದಿನ ಬರುವ ಭಕ್ತಾದಿಗಳಿಗೆ ಉಚಿತ ಪ್ರಸಾದವನ್ನು ನೀಡಲಾಗುತ್ತದೆ ಯಾವುದೇ ವಿಐಪಿ ದರ್ಶನ ನೀಡುವುದಿಲ್ಲ.
ಒಟ್ಟಾರೆ ಹೇಳುವುದಾದರೆ ಉತ್ತರ ಕರ್ನಾಟಕದಲ್ಲಿ ಬಹು ಫೇಮಸ್ ಆಗಿರುವ ಚಬ್ಬಿ ಗಣಪ್ಪ ನನ್ನು ನೋಡಲು ಕರ್ನಾಟಕದ ಮೂಲೆ ಮೂಲೆಯಿಂದಲೂ ಜನಸಾಗರ ಹರಿದು ಬರುತ್ತದೆ.




