ಹುಬ್ಬಳ್ಳಿ-ಧಾರವಾಡದ ರಾಯಪುರದಲ್ಲಿರುವ ಉತ್ತರ ಕರ್ನಾಟಕದ ಅತಿದೊಡ್ಡ ಇಸ್ಕಾನ್ ದೇವಸ್ಥಾನದಲ್ಲಿ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗಿದೆ..
ನಿರ್ಮಾಣ ಹಂತದಲ್ಲಿರುವ ಈ ಭವ್ಯ ಮಂದಿರದಲ್ಲಿ ಕಳೆದ ಬಾರಿ ಶ್ರೀ ಕೃಷ್ಣ-ಬಲರಾಮರ ಮೂರ್ತಿಗಳ ಪ್ರತಿಷ್ಠಾಪನೆಯಾಗಿತ್ತು. ಆದರೆ ಈ ಬಾರಿ ವಿಶೇಷವೆಂದರೆ, ಶ್ರೀ ರಾಧಾ-ಕೃಷ್ಣ, ನಿತಾಯಿ-ಗೌರಾಂಗ, ಕೃಷ್ಣ-ಬಲರಾಮ ಹಾಗೂ ನರಸಿಂಹ ದೇವರ ಮೂರ್ತಿಗಳು ಒಟ್ಟಿಗೆ ಪ್ರತಿಷ್ಠಾಪನೆಯಾಗಿದ್ದು, ಇದರಿಂದಾಗಿ ಈ ಬಾರಿಯ ಆಚರಣೆ ಇನ್ನಷ್ಟು ದೈವಿಕ ಕಳೆ ಪಡೆದುಕೊಂಡಿತ್ತು..
ಈ ಬಾರಿ 20 ಸಾವಿರ ಭಕ್ತರು ಆಗಮಿಸುವ ಗುರಿ ಹೊಂದಲಾಗಿತ್ತು, ಅದರಂತೆ 12 ಸಾವಿರಕ್ಕೂ ಹೆಚ್ಚು ಭಕ್ತರು ಜಪ-ಸಂಕೀರ್ತನೆಗೆ ಮುಂಚಿತವಾಗಿಯೇ ಹೆಸರು ನೋಂದಾಯಿಸಿದ್ದರು.
ದೇವಸ್ಥಾನವನ್ನು ವಿದ್ಯುತ್ ದೀಪಗಳು ಮತ್ತು ಹೂವುಗಳಿಂದ ವೈಭವೋಪೇತವಾಗಿ ಅಲಂಕರಿಸಲಾಗಿದೆ. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕಗಳು, ನೃತ್ಯ, ಸಂಗೀತ ಸ್ಪರ್ಧೆಗಳು, ರಾತ್ರಿ 12 ಗಂಟೆಯವರೆಗೆ ವಿಶೇಷ ಭಜನಾ ಕಾರ್ಯಕ್ರಮ ನಡೆದವು. ಆಗಮಿಸಿದ ಎಲ್ಲಾ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆಯನ್ನೂ ಮಾಡಲಾಗಿತ್ತು..
ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕೃಷ್ಣ ಭಕ್ತರು ಆಗಮಿಸಿದ್ದು, ಇಡೀ ರಾಯಪುರ ಕೃಷ್ಣಮಯವಾಗಿತ್ತು.
ಇನ್ನು ದೇವಸ್ಥಾನ ನಿರ್ಮಾಣಕ್ಕೆ ಅನೇಕ ಭಕ್ತರು ಟ್ರಸ್ಟ್ ಗೆ ನೆರವು ನೀಡುತ್ತಿದ್ದು, ಪೂರ್ಣಗೊಂಡ ಬಳಿಕ ಇದು ಉತ್ತರ ಕರ್ನಾಟಕದ ಪ್ರಮುಖ ಧಾರ್ಮಿಕ ಕೇಂದ್ರವಾಗಲಿದೆ.




